ಬೆಂಗಳೂರು, ಜನವರಿ 20: ಹಿರಿಯ ನಾಯಕ ಪಿ.ಜಿ.ಆರ್.ಸಿಂಧ್ಯಾ ಅವರನ್ನು ಜೆಡಿಎಸ್ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಇಂದಿಲ್ಲಿ ಪಕ್ಷದ ಕಛೇರಿಯಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಮಾಜೀ ಪ್ರಧಾನಿ ಹೆಚ್.ಡಿ.ದೇವೇಗೌಡ ಈ ವಿಷಯ ಪ್ರಕಟಿಸಿದರು.
ಸಿಂಧ್ಯಾ ಅವರನ್ನು ರಾಷ್ಟ್ರ ಮಟ್ಟದಲ್ಲಿ ಪಕ್ಷ ಕಟ್ಟಲು ಬಳಸಿಕೊಳ್ಳಬೇಕು ಎಂಬುದು ತಮ್ಮ ಉದ್ದೇಶವಾಗಿತ್ತು.ಆದರೆ ನಮ್ಮ ಪಕ್ಷಕ್ಕೆ ಆ ಮಟ್ಟದಲ್ಲಿ ಶಕ್ತಿ ಕಡಿಮೆ ಎಂದು ಹೇಳಿದರು.